ಹಾರೋಹಕ್ಕಿ ಹಾರಲು ಸಿದ್ಧ
Posted date: 07 Thu, Jul 2016 – 09:26:34 AM

ತನ್ನ ತರಲೆ ಆಟಗಳಿಂದ ತಂದೆ ತಾಯಿಗೆ ಅವಮಾನಕ್ಕಿಡುಮಾಡಿದ ಯುವಕ ಒಮ್ಮೆ ತಾನು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಹೋಗಿ ಕೆಟ್ಟ ಜನರ ಜೊತೆ ಬೆರೆತು ಅಡ್ಡ ದಾರಿ ತುಳಿಯುತ್ತಾನೆ. ಹೊರಗಿನ ಸಮಾಜದಲ್ಲಿ ಬಾಳುವುದು ಎಷ್ಟು ಕಷ್ಟ ಎಂದು ಆಗ ಆತನಿಗೆ ತಿಳಿದು ಜೀವನದ ಬೆಲೆ ಏನೆಂದು ಅರಿವಾಗುತ್ತದೆ. ಇಂತಹ ಒಂದು ವಿಶಿಷ್ಟವಾದ ಕಥೆ ಹೊಂದಿದ ಚಿತ್ರ ಹಾರೋಹಕ್ಕಿ (ಗೂಡು ತೊರೆದಾಗ) ಈಗಾಗಲೇ ಶೂಟಿಂಗ್ ಪೋಸ್ಟ್ ಪ್ರೋಡಕ್ಷನ್ ಮುಗಿಸಿ ಸೆನ್ಸಾರ್ ಕೂಡ ಆಗಿರುವ ಈ ಚಿತ್ರ  ಸದ್ಯದಲ್ಲೇ ಬಿಡುಗಡೆಯಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ಪತ್ರಕರ್ತ ನಾಗರಾಜ್ ಅರೆಹೊಳೆ ಕಥೆ-ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ನಿಮಿಷಾಂಬ ಕಮುನಿಕೇಷನ್, ಬ್ರೈನ್ ಸೆಂಟರ್ ಸಂಸ್ಥೆಯಲ್ಲಿ ಡಿ.ಶಶಿಕುಮಾರ್ ನಿರ್ಮಿಸುತ್ತಿರುವ ಹಾರೋಹಕ್ಕಿ ಚಿತ್ರಕ್ಕೆ ಆರ್.ಪಿ.ರೆಡ್ಡಿ ಛಾಯಾಗ್ರಹಣ, ಮಧುರಾ ನಾಯರಿ ಸಂಗೀತ, ಅಶೋಕ್ ಸಂಕಲನ, ರಮೇಶ್ ಬಾಬು ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಾ.ಶೃತಿಧರ್, ಬೇಬಿ ಶ್ರೇಯಾ, ಅಶೋಕ್ ಬಿ.ಎ, ಪ್ರಭಾಕರ್, ರಮೇಶ್‌ಬಾಬು, ಗಣೇಶ್‌ರಾವ್, ರೇಖಾ ಸಾಗರ್, ಪ್ರದೀಪ್, ವಿಶ್ವ ರಂಗಶೆಟ್ಟಿ, ರಮೇಶ್ ರಂಗಶೆಟ್ಟಿ, ಶೈಲಜಾ ಮಂಜುನಾಥ್ ತಾರಾಬಳಗದಲ್ಲಿದ್ದಾರೆ.
ಮಾತು ಮುಗಿಸಿದ ಬಣ್ಣ ಬಣ್ಣದ ಬದುಕು
ಶ್ರೀ ಮುತ್ತುರಾಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಕಾರ್ಕಳದ ಕೃಷ್ಣ ನಾಯ್ಕ್, ಮಾ.ಗೌತಮ್, ಮಾ.ಗಗನ್ ನಿರ್ಮಿಸುತ್ತಿರುವ ಬಣ್ಣ ಬಣ್ಣದ ಬದುಕು ಚಿತ್ರಕ್ಕೆ ಇತ್ತೀಚೆಗೆ ರಾಜೇಶ್ ರಾಮನಾಥ್ ಸ್ಟುಡೀಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಸಿ ಮುಕ್ತಾಯಗೊಂಡಿತು. ಕರಾವಳಿ ಕರ್ನಾಟಕದ ಒಬ್ಬ ಬಡ ಯಕ್ಷಗಾನ ಕಲಾವಿದನ ಸುತ್ತ ಹೆಣೆದ ಕಥೆ ಇದಾಗಿದ್ದು ಸದ್ಯದಲ್ಲೇ ಹಾಡುಗಳ ಧ್ವನಿಸುರುಳಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಪತ್ರಕರ್ತ ಇಸ್ಮಾಯಿಲ್ ಮೂಡಶದ್ದೆ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯ್ ಎಸ್ ಛಾಯಾಗ್ರಹಣ, ಎ.ಕೆ.ವಿಜಯ್ ಕೋಕಿಲ ಸಂಗೀತ, ಶಶಿಧರ್ ಕಾವೂರ್, ಸುರೇಶ್ ಆರ್.ಎಸ್. ಸಾಹಿತ್ಯ, ನಾಗೇಂದ್ರ ಅರಸ್ ಸಂಕಲನ, ಅನುಷಾ ಹೆಗ್ಡೆ ನೃತ್ಯ ನಿರ್ದೇಶನವಿದೆ. ರವಿರಾಜ್‌ಶೆಟ್ಟಿ, ಅನ್ವಿತ್ ಸಾಗರ್, ರಿಯಾ, ಮೇಘನಾ, ಸತ್ಯಜಿತ್, ರಮೇಶ್‌ಭಟ್, ಅಪೂರ್ವಶ್ರೀ, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್, ಚೇತನ್ ರೈ, ಮಾಣಿ, ರಮೇಶ್ ಕುಕ್ಕವಳ್ಳಿ, ಬಲಿಪ ನಾರಾಯಣ ಪಟ್ಲ, ಸತೀಶ್ ಶೆಟ್ಟಿ, ಶಶಿಧರ್ ಹೆಗ್ಡೆ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed